Education

ವರ್ಣ ಮಾಲೆಗಳು..

 ಅ,ಆ,ಇ,ಈ,ಉ,ಊ,ಋ,ಎ,ಏ,ಐ,ಒ,ಓ,ಔ,ಅಂ,ಅಃ.  ಕ,ಖ,ಗ,ಘ,ಙ.  ಚ,ಛ,ಜ,ಝ,ಞ.  ಟ,ಠ,ಡ,ಢ,ಣ.  ತ,ಥ,ದ,ಧ,ನ.  ಪ,ಫ,ಬ,ಭ,ಮ. ಯ,ರ,ಲ,ವ,ಶ,ಷ,ಸ,ಹ,ಳ.                  "ವರ್ಣಮಾಲೆ ಹಾಗೂ ಅವುಗಳ ವಿಧಗಳು''    ಕ್ರಮಬದ್ಧವಾಗಿ ಜೋಡಿಸಲ್ಪಟ್ಟ ಅಕ್ಷರಗಳ ಗುಂಪನ್ನು ವರ್ಣಮಾಲೆ ಎನ್ನುತ್ತಾರೆ.  ವರ್ಣಮಾಲೆಗಳನ್ನು ಕ್ರಮಬದ್ಧವಾಗಿ ಜೋಡಿಸಲ್ಪಟ್ಟ ಆಧಾರದ ಮೇಲೆ ಮುಖ್ಯವಾಗಿ ಮೂರು ವಿಭಾಗಗಳನ್ನಾಗಿ ವಿಭಾಗಿಸಲಾಗಿದೆ. ಅವುಗಳೆಂದರೆ, 1. ಸ್ವರಗಳು. 2. ವ್ಯಂಜನಗಳು. 3. ಯೋಗವಾಹಗಳು.  1. ಸ್ವರಗಳು.      ಯಾವುದೇ ಅಕ್ಷರಗಳ ಸಹಾಯವಿಲ್ಲದೆ, ಸ್ವತಂತ್ರವಾಗಿ ಉಚ್ಛರಿಸಲ್ಪಡುವ ಅಕ್ಷರಗಳನ್ನು ಸ್ವರಗಳು ಎಂದು ಕರೆಯುತ್ತೇವೆ.  ಈ ಸ್ವರಗಳಲ್ಲಿ ಮುಖ್ಯವಾಗಿ ಮೂರು ವಿಧಗಳಿವೆ. ಅವುಗಳೆಂದರೆ, ೧. ಹೃಸ್ವ ಸ್ವರ.  ಕಡಿಮೆ ಸಮಯದಲ್ಲಿ ಉಚ್ಚರಿಸಲ್ಪಡುವ ಅಥವಾ ಒಂದು ಮಾತ್ರ ಕಾಲದಲ್ಲಿ ಉಚ್ಛರಿಸಲ್ಪಡುವ ಅಕ್ಷರಗಳನ್ನು ಹೃಸ್ವ ಸ್ವರಗಳು ಎನ್ನುತ್ತಾರೆ.  ಅವುಗಳೆಂದರೆ: ಅ, ಇ, ಉ, ಋ, ಎ, ಒ.  ೨.ದೀರ್ಘ ಸ್ವರ.  ಹೆಚ್ಚು ಸಮಯದಲ್ಲಿ ಉಚ್ಛರಿಸಲ್ಪಡುವ ಅಥವಾ  ಎರಡು ಮಾತ್ರ ಕಾಲದಲ್ಲಿ ಉಚ್ಛರಿಸಲ್ಪಡುವ ಅಕ್ಷರಗಳನ್ನು ದೀರ್ಘ ಸ್ವರ ಎನ್ನುತ್ತೇವೆ.  ಅವುಗಳೆಂದರೆ: ಆ, ಈ, ಊ, ಏ, ಐ, ಓ, ಔ.  ೩. ...

ಕರ್ನಾಟಕದ ಮಹತ್ವ ಪೂರ್ಣ ವಿಚಾರಗಳು.

 1. ಕರ್ನಾಟಕದ ವಿಸ್ತೀರ್ಣ: 19,1791 ಚದರ ಕಿಲೋಮೀಟರ್.

2. ಕರ್ನಾಟಕದ ಅವಳಿ ನಗರಗಳು: ಹುಬ್ಬಳ್ಳಿ ಮತ್ತು ಧಾರವಾಡ.

3. ತುಂಗಭದ್ರಾ ಜಲಾಶಯಕ್ಕೆ ಪಂಪಸಾಗರ ಎಂದು ಕರೆಯುತ್ತಾರೆ. 

4. ಬಾರಾಪೊಲ್ ಜಲವಿದ್ಯುತ್ ಯೋಜನೆ ಕೊಡಗು ಜಿಲ್ಲೆಯಲ್ಲಿದೆ. 

5. ಪ್ರಸಿದ್ಧ ಗೋಪಾಲ ಸ್ವಾಮಿ ಬೆಟ್ಟ ಮೈಸೂರು ಜಿಲ್ಲೆಯಲ್ಲಿ ದೆ. 

6. ಮೈಸೂರಿನ ದಸರಾ ಮೊಟ್ಟ ಮೊದಲು ಪ್ರಾರಂಭವಾದುದ್ದು ಜೂನ್ 1799.

7. ಯಾಣ ಸುಣ್ಣ ಕಲ್ಲುಶಿಲೆಗಳಿಂದ ರಚನೆಯಾಗಿದೆ. ಇದು ಉತ್ತರ ಕನ್ನಡ ಜಿಲ್ಲೆಯಲ್ಲಿದೆ. 

8. ರಾಯಚೂರು ಜಿಲ್ಲೆ ಕರ್ನಾಟಕದ ಹತ್ತಿ ಕಣಿವೆಯಾಗಿದೆ. 

9.  ಕರ್ನಾಟಕದ ರಾಯಚೂರು ಜಿಲ್ಲೆಯಲ್ಲಿ ಥರ್ಮಲ್ ವಿದ್ಯುತ್ ಕೇಂದ್ರ ವಿದೆ. 

10.  ಗಗನ ಚುಕ್ಕಿ ಮತ್ತು ಭರಚುಕ್ಕಿ ಗಳ ಎತ್ತರ 300 ಅಡಿಗಳು.  

11. ಭಾರತದಲ್ಲಿ ವಿವಿಧ ರಾಜ್ಯಗಳ ಆರ್ಥಿಕ ಬೆಳವಣಿಗೆಯಲ್ಲಿ ಕರ್ನಾಟಕ 10 ನೇ ಸ್ಥಾನದಲ್ಲಿದೆ. 

12. ಶ್ರವಣಬೆಳಗೊಳದಲ್ಲಿರುವ ಗೊಮ್ಮಟೇಶ್ವರನ ವಿಗ್ರಹವನ್ನು ಕೆತ್ತಿಸಿದವರು ಚಾವುಂಂಡರಾಯ. ಈ ಗೊಮ್ಮಟ ಮೂರ್ತಿ 58 ಅಡಿ ಎತ್ತರ. 

12. ಕರ್ನಾಟಕದಲ್ಲಿರುವ ರೈಲು ಮಾರ್ಗದ ಉದ್ದ 2767 ಕಿಲೋಮೀಟರ್. 

13. ಕರ್ನಾಟಕದ ಅತ್ಯಂತ ಎತ್ತರದ ಅಣೆಕಟ್ಟು ಹೇಮಾವತಿ ಅಣೆಕಟ್ಟು. 2922 ಅಡಿಗಳು. 

14. ಮೈಸೂರಿನಲ್ಲಿರುವ ಆಹಾರ ಸಂಶೋಧನಾ ಕೇಂದ್ರ "ಸಿ.ಎಫ್.ಟಿ,ಆರ್, ಐ. 

15. ಕೈಗಾ ಅಣುಸ್ಥಾವರ ವಿದ್ಯುತ್ ಕೇಂದ್ರ ಉತ್ತರ ಕನ್ನಡ ಜಿಲ್ಲೆಯಲ್ಲಿ ದೆ. 

16. ಕರ್ನಾಟಕದ ಗೌರಿಬಿದನೂರಿನಲ್ಲಿ ಭೂಮಾಟನ ಕೇಂದ್ರವಿದೆ. 

17. ಕೆಮ್ಮಣ್ಣು ಗುಂಡಿ ಕರ್ನಾಟಕದ ಗಿರಿದಾಮಗಳ ರಾಣಿಯಾಗಿದೆ. 

18. ಕರ್ನಾಟಕದಲ್ಲಿ ರಾಜೀವ್ ಗಾಂಧಿ ಉದ್ಯಾನವನ ನಾಗರಹೊಳೆಯಲ್ಲಿದೆ. 

19. ಯಾಣದಲ್ಲಿರುವ ಶಿಖರಗಳ ಸರಾಸರಿ ಎತ್ತರ ಸುಮಾರು 120 ಮೀಟರ್ ಗಳು. 

20. ಕರ್ನಾಟಕದ ರಾಯಚೂರು ಜಿಲ್ಲೆ ಹೆಚ್ಚು ಕಾಲುವೆ ನೀರಾವರಿಗೆ ಒಳಪಟ್ಟಿದೆ. 

21. ಕೃಷ್ಣ ರಾಜ ಸಾಗರ ಅಣೆಕಟ್ಟಿನ ನಿರ್ಮಾಣ ವು 1911 ಆರಂಭವಾಯಿತು. 1932 ರಲ್ಲಿ ಮುಕ್ತಾಯವಾಯಿತು. ಇದು ಮಂಡ್ಯ ಜಿಲ್ಲೆಯಲ್ಲಿದೆ. 

22. ವ್ಯಾಘ್ರ ಯೋಜನೆ ಆರಂಭವಾದದ್ದು 1974.

23. ಕರ್ನಾಟಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಕೇಂದ್ರ ಬೆಂಗಳೂರಿನಲ್ಲಿದೆ. 

24. ಧರ್ಮಸ್ಥಳದ ಗೊಮ್ಮಟೇಶ್ವರನ ಮೂರ್ತಿಯನ್ನು ರೂಪಿಸಿದ ಶಿಲ್ಪಿ ರಂಜಾಲ ಗೋಪಾಲ ಹೆಗ್ಡೆ. 

25. ಕರ್ನಾಟಕದ ಕೋಲಾರ ಜಿಲ್ಲೆಯಲ್ಲಿ ಚಿತ್ರಾವತಿ ನದಿ ಹರಿಯುತ್ತದೆ. 

26. ಕರ್ನಾಟಕದ ಶಿಲ್ಪಕಲಾ ಕೇಂದ್ರ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಶಿವಾರ ಪಟ್ಟಣದಲ್ಲಿದೆ.

27. ಕರ್ನಾಟಕದಲ್ಲಿರುವ ಒಟ್ಟು ಅಣೆಕಟ್ಟು ಗಳ ಸಂಖ್ಯೆ 216. 

28. ವಾಣಿವಿಲಾಸ ಸಾಗರ ಅಣೆಕಟ್ಟು ವೇದಾವತಿ ನದಿಗೆ ನಿರ್ಮಿಸಲಾಗಿದೆ. 

29. ಕರ್ನಾಟಕದಲ್ಲಿ ಅಡಿಕೆ ಬೆಳೆಯನ್ನು ಹೆಚ್ಚಾಗಿ ಬೆಳೆಯುವ ಜಿಲ್ಲೆ ಶಿವಮೊಗ್ಗ. 

30. ಕರ್ನಾಟಕದ ಅತೀ ಉದ್ದವಾದ ರಾಷ್ಟ್ರೀಯ ಹೆದ್ದಾರಿ NH-4

ಧನ್ಯವಾದಗಳು.



Comments

Post a Comment

Popular posts from this blog

ಚೊಚ್ಚಲ ತಾಯ್ತನ.

ಸಂಶೋಧನೆಗಳು.

ವರ್ಣ ಮಾಲೆಗಳು..